Sanathana Natyalaya

ಅಯೋ‍ಧ್ಯೆಯ ಶ್ರೀರಾಮಮಂದಿರದಲ್ಲಿ ಅಷ್ಟಾವಧಾನ ಸೇವೆ

ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಉಡುಪಿಯ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ನೇತೃತ್ವದಲ್ಲಿ ನಡಯುತ್ತಿರುವ ಶ್ರೀ ರಾಮದೇವರ 48 ದಿನಗಳ ಮಂಡಲ ಉತ್ಸವದ ಅಷ್ಟಾವಧಾನದಲ್ಲಿ ಮಂಗಳೂರಿನ ಸನಾತನ ನಾಟ್ಯಾಲಯದ ನೃತ್ಯ ಗುರುಗಳಾದ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್ ಇವರ 16 ಶಿಷ್ಯಂದಿರಾದ ವಿದುಷಿ ಶಿಫಾಲಿ, ವಿದುಷಿ ನೇಹಾ, ವಿದುಷಿ ಕೃಪಾ, ಸಿಂಚನ ಕುಲಾಲ್, ವೈಷ್ಣವಿ ತಂತ್ರಿ, ಜಾನವಿ ಶೇಖ, ಸಾನ್ವಿ ಶೇಖ, ಅಮೃತ, ಜೀವಿತ ಸನಿಲ್, ನೇಹಾ ರಾವ್, ಭೂಮಿಕ, ನಮನ ಶ್ರೀ, ಮೋಕ್ಷ ಆರ್ ಉಳ್ಳಾಲ್, ಶ್ರೀಕರಿ ಮತ್ತು ಮಾಸ್ಟರ್ ಸುಮಂತ್ ಶೆಟ್ಟಿ ನೃತ್ಯ ಸೇವೆಯನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಪೂಜ್ಯ ಸ್ವಾಮೀಜಿಯವರು ಸನಾತನ ನಾಟ್ಯಾಲಯದ ನಿರ್ದೇಶಕರಾದ ಚಂದ್ರಶೇಖರ್ ಶೆಟ್ಟಿ ಮತ್ತು ಎಲ್ಲಾ ಕಲಾವಿದರಿಗೂ ಪ್ರಸಾದವನ್ನು ನೀಡಿ ಹರಸಿದರು.

 

 

Testimonials

For the sustenance and propagation of the Indian classical dance form – Bharathanatyam, Sanathana natyalaya is striving hard to its fullest potential. The need of spreading this dance form to...

Vidushi Artha Perla