ಮಂಗಳೂರಿನ ಸನಾತನ ನಾಟ್ಯಾಲಯ ಮತ್ತು ನೃತ್ಯಾಂಗನ್ ಪ್ರಸ್ತುತಪಡಿಸುವ “ನೃತ್ಯವಾಹಿನಿ” 2024 ರ 3ನೇ ಆವೃತ್ತಿ ಭರತನಾಟ್ಯ ಕಾರ್ಯಕ್ರಮವು ಮಾರ್ಚ್ 10 ಭಾನುವಾರ ಸಂಜೆ 5:15ಕ್ಕೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು.
ಈ ಕಾರ್ಯಕ್ರಮವನ್ನು ಕರ್ನಾಟಕ ಬ್ಯಾಂಕಿನ ಪ್ರಾದೇಶಿಕ ಕಚೇರಿಯ ಡಿಜಿಎಂ ಶ್ರೀಯುತ ವಸಂತ ಆರ್ ಹೇರ್ಲೆ ದೀಪ ಬೆಳಗಿಸಿ ಉದ್ಘಾಟಿಸಿದರು.
ಮಂಗಳೂರಿನ ಗಾನ ನೃತ್ಯ ಅಕಾಡೆಮಿಯ ನಾಟ್ಯ ವಿದುಷಿ ಅಂಕಿತಾ ರೈ, ಪುತ್ತೂರಿನ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ವಿದುಷಿ ಅಪೂರ್ವ ಗೌರಿ ಡಿ, ಮಂಗಳೂರಿನ ಸನಾತನ ನಾಟ್ಯಾಲಯದ ಪಿದುಷಿ ಛಾಯಾಶ್ರೀ, ಮಂಗಳೂರಿನ ಭರತಾಂಜಲಿಯ ವಿದುಷಿ ಪ್ರಕ್ಷಿಲ ಜೈನ್, ಕಲ್ಲಡ್ಕದ ಕಲಾ ನಿಕೇತನ ಡಾನ್ಸ್ ಫೌಂಡೇಶನ್ನ ವಿದುಷಿ ಶಾಶ್ವತ, ಉಡುಪಿಯ ನೃತ್ಯ ನಿಕೇತನ ಕೊಡವೂರಿನ ವಿದುಷಿ ಸುಮೇದ ಭರತನಾಟ್ಯ ಪ್ರದರ್ಶಿಸಿದರು.