2023 ರ ಫೆಬ್ರವರಿ 18 ರಂದು ಕರ್ನಾಟಕ ಬ್ಯಾಂಕ್ ಶತಮಾನೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಕೆ. ವಿ. ರಮಣ್ ಮಂಗಳೂರು ಪರಿಕಲ್ಪನೆ – ಸಾಹಿತ್ಯದ “ಸಹ ಯಾನದ ಮಾನ ” – ಶತಮಾನ ಗೀತೆಯನ್ನು ನೃತ್ಯ ಪ್ರದರ್ಶನದ ಮೂಲಕ ಸನಾತನ ನಾಟ್ಯಾಲಯದ ವಿದ್ಯಾರ್ಥಿನಿಯರು ಲೋಕಾರ್ಪಣೆ ಮಾಡಿದರು. ವ್ಯಾಪಕ ಮೆಚ್ಚುಗೆ ಗಳಿಸಿದ ಈ ಸಾಹಿತ್ಯ- ಸಂಗೀತ ಸಂಭ್ರಮವು ನೃತ್ಯದೊಂದಿಗೆ ಮುಪ್ಪುರಿಗೊಂಡಿತು.
ಸನಾತನ ನಾಟ್ಯಾಲಯದ ಕರ್ನಾಟಕ ಕಲಾಶ್ರೀ ವಿದುಷಿ ಶಾರದ ಮಣಿಶೇಖರ್ ಶಿಷ್ಯರು, ವಿದುಷಿ ಶ್ರೀಲತಾ ನಾಗರಾಜ್ ಸಂಯೋಜನೆಯಲ್ಲಿ ನರ್ತಿಸಿದರು. ಚಂದ್ರಶೇಖರ್ ಕೆ. ಶೆಟ್ಟಿ ಸಹಕರಿಸಿದರು.